*ಕಾಲದ ಪರಿವೆಯೇ ಇಲ್ಲದಿರುವವರಿದ್ದಾರೆ - ಯೋಗಿಗಳು ಅವರು
*ಕಾಲ ನಮ್ಮೊಂದಿಗೆ ಮಾತನಾಡುತ್ತದೆ!
*ಕಾಲವೆಂದರೆ ಸಾಕ್ಷಾತ್ ಭಗವಂತನೇ!
*ಕಾಲದ ಭಾಷೆಯನ್ನು ಅರ್ಥ ಮಾಡಿಕೊಂಡಲ್ಲಿ ಬ್ರಹ್ಮಾಂಡವೇ ನಿಮ್ಮ ಕೈಯಲ್ಲಿ!
*ಸಂಸಾರ ಸಾಕು, ಪರಮಾತ್ಮ ಬೇಕು - ಎಂದೆನಿಸುವಂತೆ ಮಾಡುವವನು ಶನಿ! ನಮ್ಮ ಮೇಲಿನ ಕರುಣೆಯಿಂದಲೇ ದುಃಖವನ್ನು ಕೊಡುವವನವನು.
*ಕಾಲವನ್ನು ಅಲ್ಲೆಲ್ಲೋ ದುರ್ಬೀನು ಹಿಡಿದು ಹುಡುಕಬೇಡಿ; ಕಾಲವೆಂದರೆ ನೀವೇ! ಸೂಕ್ಷ್ಮಮತಿಯಾದರೆ ಒಬ್ಬರ ದೇಹವನ್ನು ನೋಡಿ ಅವರ ಜಾತಕವನ್ನು ಮಾಡಬಹುದು!
*ಹೇಗೆ ಜಾತಕ ನೋಡಿ ಜೀವನ ಹೇಳಬಹುದೋ, ಜೀವನ ನೋಡಿ ಜಾತಕವನ್ನೂ ಹೇಳಬಹುದು!
-ಶ್ರೀಸಂದೇಶ 26-07-2024
#ಅನಾವರಣ_ಚಾತುರ್ಮಾಸ್ಯ - ದಿನ 6
#Chaturmasya