ಸದ್ಗುರುಗಳ ಒಂದು ಚೊಕ್ಕ, ಶಕ್ತಿಯುತ ಸಂದೇಶದೊಂದಿಗೆ ನಿಮ್ಮ ದಿನವನ್ನು ಸಂತೋಷದಾಯಕ, ಉತ್ಸಾಹಭರಿತವಾಗಿಸಿ. ಸದ್ಗುರುಗಳೊಂದಿಗೆ ಹಲವಾರು ವಿಷಯಗಳನ್ನು ಅನ್ವೇಷಿಸಿ, ಜೀವನದ ಪ್ರತಿಯೊಂದು ಅಂಶವು ಹೇಗೆ ಮುಂದಿನ ಹಾದಿಯನ್ನು ತೋರಿಸಬಲ್ಲದು ಹಾಗೂ ,
ನಮ್ಮಲ್ಲಿ ಹುದುಗಿರುವ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಅರಿಯಿರಿ.
ಅತಿಮಾನವ ಶಕ್ತಿಗಳೆಂದರೆ ಎಲ್ಲರಿಗೂ ಕುತೂಹಲ! ನಮಗೆ ನೀರಿನಲ್ಲಿ ನಡೆಯಲು ಬಂದರೆ ಹೇಗಿರುತ್ತೆ? ಗಾಳಿಯಲ್ಲಿ ಹಾರಲು ಬಂದರೆ ಹೇಗಿರುತ್ತೆ? ಅಂತ ಅನೇಕರು ಕಲ್ಪಿಸಿಕೊಂಡು ರೋಮಾಂಚಿತರಾಗುತ್ತಿರುತ್ತಾರೆ. ಇದು ಅಂತಹ ವ್ಯಕ್ತಿಯೊಬ್ಬನ ಕಥೆ. ಆತ ಕೇವಲ ಕಲ್ಪಿಸಿ ರೋಮಾಂಚಿನಾಗುವುದರಲ್ಲಿ ತೃಪ್ತನಾಗಿಲ್ಲ, ಇನ್ನೂ ಮುಂದಕ್ಕೆ ಹೋಗಿ ಸಾಧಿಸಿಯೇ ತೀರುತ್ತೇನೆ ಎಂಬ ಛಲದಲ್ಲಿ ಟಿಬೆಟ್ ಗೆ ಧಾವಿಸಿದ್ದಾನೆ. ಮುಂದೇನಾಯಿತು? ಆತನಿಗೆ ಅತಿಮಾನವ ಶಕ್ತಿಗಳು ದೊರೆತವೇ? ಆತ ಏನು ಮಾಡಿದ? ಈ ಕಥೆಯಿಂದ ನಮಗೆ ತಿಳಿದುಬರುವ ಜೀವನ ಪಾಠ ಏನು?
ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ.
See omnystudio.com/listener for privacy information.
Learn more about your ad choices. Visit megaphone.fm/adchoices