ಸದ್ಗುರುಗಳ ಒಂದು ಚೊಕ್ಕ, ಶಕ್ತಿಯುತ ಸಂದೇಶದೊಂದಿಗೆ ನಿಮ್ಮ ದಿನವನ್ನು ಸಂತೋಷದಾಯಕ, ಉತ್ಸಾಹಭರಿತವಾಗಿಸಿ. ಸದ್ಗುರುಗಳೊಂದಿಗೆ ಹಲವಾರು ವಿಷಯಗಳನ್ನು ಅನ್ವೇಷಿಸಿ, ಜೀವನದ ಪ್ರತಿಯೊಂದು ಅಂಶವು ಹೇಗೆ ಮುಂದಿನ ಹಾದಿಯನ್ನು ತೋರಿಸಬಲ್ಲದು ಹಾಗೂ ,
ನಮ್ಮಲ್ಲಿ ಹುದುಗಿರುವ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಅರಿಯಿರಿ.
ಬರುವ ಕೋಪದಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂಬ ಪ್ರಶ್ನೆಯೊಂದನ್ನು ಉತ್ತರಿಸುತ್ತಾ ಸದ್ಗುರುಗಳು ಸ್ಪಷ್ಟಪಡಿಸುತ್ತಾರೆ - ಕೋಪವೆಂಬುದು ಎಲ್ಲೋ ಕೂತಿರುವ ಒಂದು ವಸ್ತುವಲ್ಲ ನಾವು ಅದನ್ನು ತಪ್ಪಿಸಲು. ಕೋಪವು ಒಂದು ಸಮಸ್ಯೆಯಾಗಿರುವುದಕ್ಕೆ ಮೂಲಭೂತ ಕಾರಣವೇನೆಂದರೆ ನಮ್ಮ ಮನಸ್ಸು ನಮ್ಮ ಆದೇಶಗಳನ್ನು ಸ್ವೀಕರಿಸುತ್ತಿಲ್ಲ. ನಾವು ಸರಿಪಡಿಸಬೇಕಾದುದು ಅದನ್ನು ಎಂದು ನಮಗೆ ತಿಳಿ ಹೇಳುತ್ತಾರೆ.
ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ.
See omnystudio.com/listener for privacy information.
Learn more about your ad choices. Visit megaphone.fm/adchoices